Tuesday, August 19, 2008

ಏಂತಹ ಜನಾ ಅಂತೇನ್ರಿ?

ಅಲ್ರೀ ಏನ್ ಜನಾ ಅಂತೇನಿ ಇವ್ರು. ಲೋಕಸಭೆಯಲ್ಲಿ ವಿಶ್ವಾಸ ಮತ ಗಳಿಸಲು ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷದವರು ಕೋಟಿಗಟ್ಟಲೇ ಹಣವನ್ನು ಸಂಸದರಿಗೆ ಕೊಟ್ಟು ಖರೀದಿ ಮಾಡಿದ್ರು. ಕೆಲವರನ್ನು ಖರೀದಿಸಲು ಯತ್ನಿಸಿದರು ಎಂದು ಸದನದಲ್ಲೇ ನೋಟಿನ ಕಟ್ಟು ಪ್ರದರ್ಶಿಸಿದರು.
ಅಣು ಒಪ್ಪಂದ ವಿಷಯ ಒತ್ತಟ್ಟಿಗೆ ಇರಲಿ. ಈ ಕೋಟಿಗಟ್ಟಲೆ ಹಣ ಲಂಚ ಕೊಡುವುದು ಐತಲ್ಲ. ಇದು ದೇಶಕ್ಕೆ ತುಂಬಾ ಅಪಾಯಕಾರಿ. ಹಣ ಕೊಟ್ಟರೆ, ಅಧಿಕಾರ ಕೊಟ್ಟರೆ ಮತಹಾಕುವುದು. ಪಕ್ಷ ಬದಲಿಸುವುದು. ಸಜ್ಜನರ ಕೆಲಸವೋ. ಕಳ್ಳಕಾಕರ ಕೆಲಸವೋ ಎಂದು ಜನರು ಇಂದು ತುಂಬಾ ಶಾಂತ ಚಿತ್ತದಿಂದ ಕುಳಿತು ವಿಚಾರ ಮಾಡಬೇಕಾಗೇದ.
ವಿಶ್ವಾಸ ಮತಕ್ಕೆ ಲಂಚ ಕೊಡುವ ಹಗರಣ ಮರೆಮಾಚಲು ದೇಶದಲ್ಲಿ ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷದವರು ಭಯೋತ್ಪಾದನೆ ಚಟುವಟಿಕೆ ನಡೆಸುತ್ತಿದ್ದಾರೆ. ಅಲ್ಲಲ್ಲಿ ಬಾಂಬ್ ಸ್ಫೋಟದಂತಹ ಪ್ರಕರಣಗಳಿಗೆ ಕುಮ್ಮಕು ನೀಡುತ್ತಾರೆ ಎಂದು ಬಿಜೆಪಿ ಮುಖಂಡರು ಆರೋಪಿಸುತ್ತಾರೆ. ಅಯ್ಯೋ ಮಹಾರಾಯ ಇದು ಸತ್ಯೇನಾ?. ನಾವೆಲ್ಲ ಸೇರಿ ಇಂತಹ ಸಂಸದರನ್ನು ಆಯ್ಕೆ ಮಾಡ್ತೇವಾ? ಅಯ್ಯಯ್ಯೋ ನಮ್ಮ ತಿಗಾಕ್ಕೆ ಯಾರರ ನಾಕೇಟು ಒದಿಲಿ. ಎಂತಹ ದುಷ್ಟ ಜನಾ ಇದ್ದೇವ್ರಿ ನಾವು? ಅಥವಾ ಸುಮ್ಮಸುಮ್ಮನೇ ಬೇಜವಾಬ್ದಾರಿ ಹೇಳಿಕೆ ನೀಡುತ್ರೋ ಹ್ಯಾಂಗೋ? ಹಂಗೇನರ ಇದ್ದರೆ ಬಾಯಿಗೆ ಬಂದ್ಹಂಗೆಲ್ಲ ಮಾತಾಡಿ ದೇಶದ ಮರ್ಯಾದೆ ಮೂರು ಕಾಸಿಗೆ ಹರಾಜು ಹಾಕ್ತಾರಲ್ಲ ಇಂತಹ ಜನರನ್ನು ಆಯ್ಕೆ ಮಾಡುವ ನಮಗೆಲ್ಲ ಏನಂತ ಅನಬೇಕು ಅಂತೇನಿ.
ಒಟ್ಟಿನ ಮೇಲೆ ಇಲ್ಲಾ ಅವರು ಕೆಟ್ಟವರು ಇದ್ದು ನಮ್ಮನ್ನೆಲ್ಲ ಹಾದಿ ತೆಪ್ಪಿಸಿ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿರಬೇಕು. ಇಲ್ಲಾ ನಾವು ಎಂತಹವರನ್ನು ಆಯ್ಕೆ ಮಾಡಬೇಕು ಎಂಬುದರ ಪ್ರಾಥಮಿಕ ಜ್ಞಾನ ಇಲ್ಲದೇ ಭಯೋತ್ಪಾದಕರು, ಬೇಜಾಬ್ದಾರಿ ಜನರನ್ನು ಆಯ್ಕೆ ಮಾಡಿ ಸಂಸತ್ಗೆ ಕಳಿಸುತ್ತಿರಬೇಕು.
ಅದಕ್ಕ ಭಾರತಕ್ಕೆ ಬ್ರಿಟೀಷರು ಸ್ವಾತಂತ್ರ್ಯ ಕೊಡಾಕ ಹಿಂದೇಟು ಹಾಕಿದರು. ಅಂದಿನ ಪ್ರಧಾನಿಯಾಗಿದ್ದ ಚರ್ಚಿಲ್, ‘ಭಾರತೀಯರು ಇನ್ನು ತಮ್ಮನ್ನ ತಾವು ಆಳ್ವಿಕೆ ಮಾಡಿಕೊಳ್ಳುವಷ್ಟು ಪ್ರಬುದ್ಧರಾಗಿಲ್ಲ. ಈಗೇನರ ಸ್ವಾತಂತ್ರ್ಯ ಕೊಟ್ಟಿವಿ ಅಂದ್ರೆ ಭಾರತವನ್ನು ಕಳ್ಳಕಾಕರು, ದರೋಡೆಕೋರರು ಮುಂದೊಂದು ದಿನ ಆಳುತ್ತಾರೆ’ ಎಂದು ಹೇಳಿದ ಮಾತು ಈಗ ಖರೆ ಖರೇ ಅನಸ್ತದಲ್ಲಪೋ.
ಆದ್ರ ಗಾಂಧಿ ತಾತಾ ಅವರು ನೀವು ಮೊದಲು ದೇಶ ಬಿಟ್ಟು ಹೋಗ್ರಿ. ನಾವೆಲ್ಲ ದೇಶ ಆಳ್ತೇವಿ ಅಂತಾ ಹೇಳಿ ಅವರನ್ನ ಹೊರಗ ಹಾಕಿ ದೇಶನ ನಮ್ಮಂತಹವರ ಕೈಗೆ ಕೊಟ್ಟ ಹೋದ್ರು. ಕೊಟ್ಟದ್ದನ್ನು ಇಷ್ಟ ಚಂದಾಗಿ ಇಟ್ಕೊಂಡೇವಿ ನೋಡ್ರಿ.
ಛೇ. ನಮ್ಮದು ಎಂತಹ ದೇಶ, ನಾವು ಎಂತಹಾ ಜನ್ರು ಅಂತೇನಿ.